ಸೋಮವಾರ, ಆಗಸ್ಟ್ 5, 2013

ದಾರಿಯುದ್ದಕ್ಕೂ ನೆರಳಿರಲಿಲ್ಲ್ಲ
ಮರದಡಿ ಬಾಡಿದ ಹೂರಾಶಿಯಿತ್ತು

ದಾರಿಯುದ್ದಕ್ಕೂ ಬೆಳಕಿರಲಿಲ್ಲ
ಎದೆಯ ತುಂಬಾ ಬೆಂಕಿಯಿತ್ತು

ದಾರಿ ದೂರದ್ದಾಗಿರಲಿಲ್ಲ
ಹೆಜ್ಜೆ ಬಹಳ ಭಾರವಾಗಿತ್ತು

ದಾರಿಯಲ್ಲಿ ಕತ್ತಲಿರಲಿಲ್ಲ
ಕಣ್ಣು ಅದೇಕೋ ಮಂಜಾಗಿತ್ತು

ಕಲ್ಲು ಇನ್ನೂ ದೂರದಲ್ಲೇ ಇತ್ತು
ನಾನು ಮೊದಲೇ ಎಡವಿದ್ದೆ

-ಕೆಂಚನೂರಿನವ

3 ಕಾಮೆಂಟ್‌ಗಳು:

  1. ಮನಸ್ಸಿನ ಈ ಸ್ಥಿತಿ ನಿಜವಾಗಲೂ ಅಪಾಯಕಾರಿ, ನಾನೂ ಹೊರಬರಬೇಕಿದೆ!

    ಪ್ರತ್ಯುತ್ತರಅಳಿಸಿ
  2. ಅಂದದ ಕವನಕ್ಕೊಂದು ಚೆಂದದ ಶೀರ್ಷಿಕೆ ಕೊಡಿ ಎಂಬ ಪ್ರೀತಿಯ ವಿನಂತಿ ದೇವಾಡಿಗರೆ :-)

    ಪ್ರತ್ಯುತ್ತರಅಳಿಸಿ
  3. ಇನ್ಮುಂದೆ ಪ್ರಯತ್ನ ಮಾಡ್ತೀನಿ :-)
    thnk you

    ಪ್ರತ್ಯುತ್ತರಅಳಿಸಿ