ದಾರಿಯುದ್ದಕ್ಕೂ ನೆರಳಿರಲಿಲ್ಲ್ಲ
ಮರದಡಿ ಬಾಡಿದ ಹೂರಾಶಿಯಿತ್ತು
ದಾರಿಯುದ್ದಕ್ಕೂ ಬೆಳಕಿರಲಿಲ್ಲ
ಎದೆಯ ತುಂಬಾ ಬೆಂಕಿಯಿತ್ತು
ದಾರಿ ದೂರದ್ದಾಗಿರಲಿಲ್ಲ
ಹೆಜ್ಜೆ ಬಹಳ ಭಾರವಾಗಿತ್ತು
ದಾರಿಯಲ್ಲಿ ಕತ್ತಲಿರಲಿಲ್ಲ
ಕಣ್ಣು ಅದೇಕೋ ಮಂಜಾಗಿತ್ತು
ಕಲ್ಲು ಇನ್ನೂ ದೂರದಲ್ಲೇ ಇತ್ತು
ನಾನು ಮೊದಲೇ ಎಡವಿದ್ದೆ
-ಕೆಂಚನೂರಿನವ
ಮನಸ್ಸಿನ ಈ ಸ್ಥಿತಿ ನಿಜವಾಗಲೂ ಅಪಾಯಕಾರಿ, ನಾನೂ ಹೊರಬರಬೇಕಿದೆ!
ಪ್ರತ್ಯುತ್ತರಅಳಿಸಿಅಂದದ ಕವನಕ್ಕೊಂದು ಚೆಂದದ ಶೀರ್ಷಿಕೆ ಕೊಡಿ ಎಂಬ ಪ್ರೀತಿಯ ವಿನಂತಿ ದೇವಾಡಿಗರೆ :-)
ಪ್ರತ್ಯುತ್ತರಅಳಿಸಿಇನ್ಮುಂದೆ ಪ್ರಯತ್ನ ಮಾಡ್ತೀನಿ :-)
ಪ್ರತ್ಯುತ್ತರಅಳಿಸಿthnk you