ಏನೂ ಚಿಗುರುವುದಿಲ್ಲ
ನಿನ್ನಲ್ಲಿ
ಎಂದು ಕವಿ ಜರಿದ
ಕಳ್ಳಿ ಗಿಡ
ಎರಡು ಹೂವರಳಿಸಿ
ಮರುಭೂಮಿಯನ್ನ ಸಂತೈಸಿತು
ಶನಿವಾರ, ಮಾರ್ಚ್ 30, 2013
ಶುಕ್ರವಾರ, ಮಾರ್ಚ್ 29, 2013
ಎರಡೇ ಕಣ್ಣು
ಲೆಕ್ಕವಿಲ್ಲದಷ್ಟು ನೋಟ
ದೃಷ್ಟಿ ಕೊಡಬಹುದು
ದೃಷ್ಟಿಕೋನವಲ್ಲ
ಕಣ್ಣು ಮುಚ್ಚಿದಾಗಲೆಲ್ಲ
ಕತ್ತಲಾಗುತ್ತದೆ
ಕಣ್ಣು ತೆರೆದಾಗಲೆಲ್ಲ
ಬೆಳಕಿರುವುದಿಲ್ಲ
ಕತ್ತಲಲ್ಲಿ
ಸಮಾನತೆ ಇದೆ
ಎಲ್ಲವೂ ಕಪ್ಪಾಗುತ್ತದೆ
ಎಲ್ಲ ಹೂಗಳೂ
ಸೂರ್ಯನ ಪಾಲಲ್ಲ
ಕೆಲವು
ಚಂದ್ರನ ಕಂಡೂ ಅರಳುತ್ತವೆ
ಬಹಳ ನಾಚಿಕೆ
ಹೂಗಳಿಗೆ
ಬೆಳಕಲ್ಲಿ ಅರಳುವುದಿಲ್ಲ
ಮೋಡವಾದರೆ ಸಾಕು
ನವಿಲ ಆಸೆಗೆ
ಕಣ್ಣು ಸಾವಿರ
ಸೋಮವಾರ, ಮಾರ್ಚ್ 25, 2013
ಬಹಳ ಪ್ರೀತಿಯೇನಿಲ್ಲ
ನೀನೆಂದರೆ ನನಗೆ
ಆದರೂ...
ನಿನ್ನ ಧೇನಿಸಿದ್ದು ಸುಳ್ಳಲ್ಲ
ತುಂಬು ಕಂಗಳ ಜೊತೆಗೆ
ನನ್ನ ಏಕಾಂತದಲ್ಲಿ
ಭರಿಸಲಾಗದ ಅವಮಾನದಲ್ಲೊಮ್ಮೆ
ಮತ್ತೆ ಕನಸುಗಳು ಕಮರಿ ಬಿದ್ದಾಗ
ನೀನು ಬಂದಿರಲಿಲ್ಲ ಅಷ್ಟೇ
ನನಗೂ ನಿನ್ನೆಡೆಗೆ ನಡೆದು ಬರುವ ಧೈರ್ಯವಿರಲಿಲ್ಲ
ನೀನೂ ಕೈ ಹಿಡಿಯಲಿಲ್ಲ
ಇಂದೂ ನಿನ್ನದೇ ಧ್ಯಾನ ನನಗೆ
ಈ ಸಂಭ್ರಮವೆಲ್ಲ ನಿನ್ನದೇ ಕಾಣಿಕೆ
ನಮ್ಮದೇನಿದ್ದರೂ ವ್ಯರ್ಥ ಹವಣಿಕೆ
ಜನ್ಮ ಕೊಟ್ಟವರಿಗಷ್ಟೆಯಲ್ಲ
ನಿನಗೂ ನಾ ಚಿರಋಣಿ
ಬೆನ್ನ ಹಿಂದೆಯೇ ಇದ್ದರೂ
ಇರಿಯದೇ ಇದ್ದುದಕ್ಕೆ
ಆದರೆ ಈಗೀಗ ಅನ್ನಿಸುತ್ತಿದೆ
ನಿನ್ನ ದ್ವೇಷಿಸಬೇಕೆಂದು
ಬದುಕ ಪ್ರೀತಿಸಬೇಕೆಂದು
ಆದರೇನು?
ದ್ವೇಷಿಸಿದರೂ ಪ್ರೀತಿಸಿದರೂ
ನೀ ಬರುವುದುದು
ನಿನಗೆ ಬೇಕೆನ್ನಿಸಿದಾಗಲೇ
ನಾನು ಕೋರಿದಾಗಲಲ್ಲ
ಆದರೂ ಒಂದು ಕೋರಿಕೆ
ಬರಬೇಡ ಹಿಂಬಾಗಿಲಲ್ಲಿ ಕಳ್ಳನಂತೆ
ಎದುರಲ್ಲೇ ಬಾ
ಆಪ್ತ ಮಿತ್ರನಂತೆ
ತೋಳ್ದೆರೆದು ಸ್ವಾಗತಿಸುವೆ
ಸಾವಿಗೆ
ಬಹಳ ಪ್ರೀತಿಯೇನಿಲ್ಲ
ನೀನೆಂದರೆ ನನಗೆ
ಆದರೂ...
ನಿನ್ನ ಧೇನಿಸಿದ್ದು ಸುಳ್ಳಲ್ಲ
ತುಂಬು ಕಂಗಳ ಜೊತೆಗೆ
ನನ್ನ ಏಕಾಂತದಲ್ಲಿ
ಭರಿಸಲಾಗದ ಅವಮಾನದಲ್ಲೊಮ್ಮೆ
ಮತ್ತೆ ಕನಸುಗಳು ಕಮರಿ ಬಿದ್ದಾಗ
ನೀನು ಬಂದಿರಲಿಲ್ಲ ಅಷ್ಟೇ
ನನಗೂ ನಿನ್ನೆಡೆಗೆ ನಡೆದು ಬರುವ ಧೈರ್ಯವಿರಲಿಲ್ಲ
ನೀನೂ ಕೈ ಹಿಡಿಯಲಿಲ್ಲ
ಆದರೆ ಈಗೀಗ ಅನ್ನಿಸುತ್ತಿದೆ
ನಿನ್ನ ದ್ವೇಷಿಸಬೇಕೆಂದು
ಬದುಕ ಪ್ರೀತಿಸಬೇಕೆಂದು
ಆದರೇನು?
ದ್ವೇಷಿಸಿದರೂ ಪ್ರೀತಿಸಿದರೂ
ನೀ ಬರುವುದುದು
ನಿನಗೆ ಬೇಕೆನ್ನಿಸಿದಾಗಲೇ
ನೀನು ಬಯಸಿದಾಗಲಷ್ಟೆ
ನಾನು ಕೋರಿದಾಗಲಲ್ಲ
ಆದರೂ ಒಂದು ಕೋರಿಕೆ
ಬರಬೇಡ ಹಿಂಬಾಗಿಲಲ್ಲಿ ಕಳ್ಳನಂತೆ
ಎದುರಲ್ಲೇ ಬಾ
ಆಪ್ತ ಮಿತ್ರನಂತೆ
ತೋಳ್ತೆರೆದು ಸ್ವಾಗತಿಸುವೆ
-ಕೆಂಚನೂರಿನವ
ಕೇದಗೆಯ ಬನದಲ್ಲ
ಮೈ ಮರೆತು ಮಲಗಿತ್ತು
ಘಮದ ಅಮಲಿನಲಿ
ಕೇಕೆ ಹಾಕಿತು
ರಣಹದ್ದು ಒಮ್ಮೆ
ಅಮಲಿನಲಿ ಕೇಳಲಿಲ್ಲ
ಹಾವಿಗೆ
ಇನ್ನಷ್ಟು ಹತ್ತಿರದಲಿ
ಸಾವಿನ ಕೇಕೆ
ಭ್ರಮೆ ಬಿಟ್ಟು ಎದ್ದರೆ
ಬಿಡುತ್ತಿಲ್ಲ
ಕೇದಗೆಯ ನಂಟು
ಓಡಲು
ಎರಗಿದ ರಣಹದ್ದು
ಬಾಚಿಕೊಂಡಿತು ಕಾಲಲ್ಲಿ
ಮೇಲೆರುತ್ತದ್ದಂತೆಲ್ಲಾ
ಅಮಲು ಮರೆಯಾಗಿ
ನಿಜದ ದರ್ಶನ
ತಡವಾಗಿ ಬಿಟ್ಟಿದೆ
ಇನ್ನಿಲ್ಲ ಪ್ರಯೋಜನ
ಸಾವು ಕರೆದೊಯ್ಯುವಾಗ
ಹಿಂಬಾಲಿಸ ಬೇಕಷ್ಟೆ
ಇದು ಬದುಕು
ಅಮಲಿಳಿಯದೆ ದರ್ಶನವಿಲ್ಲ
ದರ್ಶನವಿಲ್ಲದೆ ಅಮಲಿಳಿಯುವುದಿಲ್ಲ
ಶನಿವಾರ, ಮಾರ್ಚ್ 23, 2013
ಶುಕ್ರವಾರ, ಮಾರ್ಚ್ 22, 2013
ಗೆಳೆಯನಿಗೆ
ದಾಟಲೇಬೇಕೆಂಬ ಧಾವಂತವೇಕೆ?
ದಾಟಲಾಗದ ಕಡಲು ಮೂರುದಿನದ ಬಾಳು
ಮೀಟಿ ನೋಡು ಪ್ರತಿ ಎದೆಯ ತಂತಿ
ಮಧುರ ಸಂಗೀತದಂತೆ ಕೇಳಬಲ್ಲೆಯಾದರೆ
ಅಣಿಗೊಳಿಸು ನಿನ್ನೆದೆಯ ವೀಣೆಯಂತೆ
ಯಾರೋ ಬಂದು ಮೀಟಲು ಕೇಳೀತು
ಮಧುರ ಸಂಗೀತದಂತೆ
ನೋವ ಹುಡುಕಿ ಹೊರಟ ನೀನು
ನಲಿವ ಹೇಗೆ ಪಡೆಯುವೆ
ಪ್ರೇಮವಿರಲಿ ಎದೆಯಲಿ
ನಾವು ನೋಡಿದಂತೆ ಜಗವು
ಕಾಣುವುದು ನಂಬು ಗೆಳೆಯ
ಹೆಚ್ಚು ಲೆಕ್ಕಾಚಾರ ಬೇಡ
ಮೂರು ದಿನದ ಬಾಳಿಗೆ
ನೆಂಟರಂತೆ ನೋವು-ನಲಿವು
ನಮ್ಮ ಇಂದು-ನಾಳೆಗೆ
ನಂಬಿ ಬದುಕು ತಣ್ಣಗೆ
ಬುಧವಾರ, ಮಾರ್ಚ್ 20, 2013
ಮಂಗಳವಾರ, ಮಾರ್ಚ್ 19, 2013
ಹೂ ಕವಿತೆ
ಸುಮವನದ ದಾರಿಯಲ್ಲಿ
ಹಾಯ್ದು ಹೋಗಿದ್ದಕ್ಕೆ
ಗಾಳಿಗೆ ಸುಮವು ನೀಡಿದ್ದು
ಪರಿಮಳದ ಕಾಣಿಕೆ
ದಾರಿಯುದ್ದಕ್ಕೂ ಹರಡಲೆಂದು
ಗಾಳಿಯೂ ಉದಾರಿ...
ಉಳಿಸಿಕೊಳ್ಳಲಿಲ್ಲ ಏನನ್ನೂ
ಹಂಚಿ ಹೋಯಿತು ದಾರಿಯುದ್ದಕ್ಕೂ
ಕಲಿಯಬೇಕು ನಾನೂ
ಸೋಕಿ ಹೋದವರಿಗೂ
ಹೊಸಕಿ ಹೋದವರಿಗೂ
ಸಮನಾಗಿ ಪರಿಮಳ ಹಂಚುವ
ಹೂವಿನ ಉದಾರತೆ
ಕಲಿಯಬೇಕಿದೆ ಗಾಳಿಯಿಂದಲೂ
ಪಡೆದದ್ದನ್ನ ಉಳಿಸಿಕೊಳ್ಳದೆ
ಅಲ್ಲಲ್ಲೇ ಹಂಚುವ ಸುಗುಣವನ್ನ
ಸೋಮವಾರ, ಮಾರ್ಚ್ 18, 2013
ಬುಧವಾರ, ಮಾರ್ಚ್ 13, 2013
ಪಲುಕುಗಳು
*******************
ನಾನು ಇತ್ತೀಚೆಗೆ ಕುಡಿಯುವುದನ್ನ ಬಿಟ್ಟಿದ್ದೇನೆ
ಕಾರಣವಿಷ್ಟೇ
ಅವಳ ನೆನಪಿನಲ್ಲಿ ಸಾಕಷ್ಟು ಅಮಲಿದೆ
***********************************
ಸದಾ ಅವಳ ನಶೆಯಲ್ಲೇ ತೇಲುವ ನನ್ನ ಕಂಡು
ನನ್ನ ಮಧುಶಾಲೆಯ ಮಿತ್ರರಿಗೆ ಹೊಟ್ಟೆ ಕಿಚ್ಚು
***********************************
ಮಧು ಶಾಲೆಯ ಮಾಲಕಿಗೆ ನನ್ನ ಮೇಲೆ ಅನುಮಾನವಂತೆ
ಇವನು ಇನ್ನೆಲ್ಲೋ ಕುಡಿದು ಬರುತ್ತಿರ ಬಹುದೆಂದು
***********************************
ಮಧು ಕರುಳು ಸುಡುತ್ತದಂತೆ
ನಿಮಗೆ ಗೊತ್ತಿಲ್ಲ
ಪ್ರೀತಿ ಪ್ರೇಮ ಹೃದಯವನ್ನ ಸುಡುತ್ತೆ
***********************************
ಕಳ್ಳನಷ್ಟೇ ಅಲ್ಲ
ವಿರಹಿಯೂ ಬೆಳದಿಂಗಳನ್ನ ಬಹಳ ದ್ವೇಷಿಸುತ್ತಾನೆ
***********************************
ಕಣ್ಣು ಹನಿಯಾಗದೆ
ಯಾವ ಪ್ರೇಮವೂ ಕೊನೆಯಾಗಿಲ್ಲ
***********************************