ಕೋಗಿಲೆಯ ಹಾಡಿಹೊಗಳುವವರೇ..
ಕಾಗೆಯ ಹೀಯಾಳಿಸದಿರಿ
ಕೋಗಿಲೆಯ ಕೊರಳಿಗೆ
ಕಾಗೆಯ ಕರುಳಿನ ಹಂಗಿದೆ
-ಕೆಂಚನೂರಿನವ
ಶುಕ್ರವಾರ, ಮೇ 31, 2013
ಗುರುವಾರ, ಮೇ 30, 2013
ಬುಧವಾರ, ಮೇ 29, 2013
ಬದಲಾಗದ ಬದುಕಿನ ಕೆಲವು ಬಣ್ಣವಿಲ್ಲದ ಪುಟಗಳು
...ಈ ಕ್ಯಾಪ್ಟನ್ ಭಟ್ಟ ಇದ್ದಾನಲ್ಲ ಅವನ್ನ ನೋಡಿದ್ರೆ ಹೊಡೆದು ಕೊಂದುಬಿಡಬೇಕು ಅನ್ಸುತ್ತೆ ಒಂದೊಂದ್ಸಲ ,ಏನೋ ಇವನಪ್ಪನರೆಸ್ಟೋರೆಂಟ್ ಅನ್ನೋ ತರಾ ಆಡ್ತಾನೆ.ನಂಗೆ ಗೊತ್ತಿಲ್ವ ಗೆಸ್ಟ್ ಹೋದ ಕೂಡ್ಲೇ ಟೇಬಲ್ ಕ್ಲಿಯರ್ ಮಾಡ್ಬೇಕು ಅಂತ ?..ಬೇಕೆಂದೆ ಹುಡುಗೀರ ಎದುರೇ ಟೇಬಲ್ ಕ್ಲಿಯರ್ ಮಾಡೋಕೆ ಹೇಳ್ತಾನೆ. ಇವ್ನು ಬಿಲ್ ಫೋಲ್ಡರಿಂದ ಟಿಪ್ಸ್ ಹೊಡೆಯೋದು ಗೊತ್ತಿಲ್ಲ ಅಂದುಕೊಂಡಿದ್ದಾನೆ ನಾಳೆ ಬ್ರೀಫಿಂಗ್ ಟೈಮಲ್ಲಿ ಮ್ಯಾನೇಜರ್ ಹತ್ರ ಹೇಳ್ಕೊಡ್ತೀನಿ ಅವ್ನಿಗೆ.(ಪಾಪ ಅವನ ಮಗಳಿಗೆ ಹುಷಾರಿಲ್ವಂತೆ,ಬೇಡ ಎಷ್ಟು, ಚಂದವಿದೆ ಮಗು).....
ಆದ್ರೂ ಭಟ್ರು ಒಳ್ಳೆಯವ್ರು ನಾನ್'ವೆಜ್ ಮಾಡಿದಾಗಲೆಲ್ಲ ತಾನು ತಿನ್ನದಿದ್ದರೂ,ಹಾಕಿಸಿಕೊಂಡು ನನಗೆ ಕೊಡ್ತಾರೆ ಛೇ! ಇನ್ಮೇಲೆ ಭಟ್ರಿಗೆ ಬೈಬಾರ್ದು
***********************************
ಈ ಗೆಸ್ಟ್'ಗಳು ಹನ್ನೊಂದೂವರೆ ಆದ್ರೂ ಹೋಗಲ್ಲ ಇವ್ರಿಗೇನು ಮನೆ ಮಠ ಇಲ್ವಾ?.ಹನ್ನೊಂದು ಕಾಲಿಗೆ ಫೈನಲ್ ಆರ್ಡರ್ ಅಂತ ಹೋದ್ರೆ ಇವ್ರು ಏನೂ ಬೇಡ ಅಂತಾರೆ,ಹನ್ನೊಂದು ಮುಕ್ಕಾಲಿಗೆ ಇವ್ರಿಗೆ ಶುರುವಾಗುತ್ತೆ ಇವ್ರ ಇನ್ನೊಂದು ಲಾರ್ಜಿನ ಆಲಾಪ .
ಈ ಸಲ ಏನಾದ್ರೂ ಮಾಡಿ ಪಾಸ್'ಪೋರ್ಟ್ ಮಾಡಿಸ್ಕೊಬೇಕು ದುಬಾಯಿಗಾದ್ರೂ ಹೋಗ್ಬೇಕು.ಮುದಾಸಿರ್'ಗೆ ನಾಳೆ ಫೋನ್ ಮಾಡ್ಬೇಕು ಅಲ್ಲೊಂದು ಕೆಲ್ಸ ನೋಡೋಕೆ
ಒಳ್ಳೆ ಸಂಬಳವಿದೆಯಂತೆ ಅಲ್ಲಿ.ಅವ್ನು ಅಲ್ಲಿಗೆ ಹೋದ್ಮೇಲೆ ಇಬ್ಬರು ತಂಗಿಯರ ಮದುವೆ ಮಾಡಿದ್ದಾನೆ ಅದೂ ಒಂದುರೂಪಾಯಿ ಸಾಲ ಇಲ್ಲದೆ. ಈ ಬೆಂಗ್ಳೂರಲ್ಲಿದ್ದು ಕಿತ್ತಾಕಿದ್ದು ಅಷ್ಟರಲ್ಲೇ ಇದೆ.(ಈ ಸಲ ಏನಾದ್ರೂ ಮಾಡಿ ತಂಗಿ ಮದುವೆ ಮಾಡಿಬಿಡಬೇಕು) ಥೂ ದರಿದ್ರ ಸೊಳ್ಳೆಗಳು ಮಲ್ಕೊಳ್ಳೋಕು ಬಿಡಲ್ಲ ಈ ಸಲ ವೀಕ್ ಆಫ್ ದಿನ ಒಂದು ಸೊಳ್ಳೆಪರ್ದೆ ತಗೋಬೇಕು.(ಈ ವಾರದ ಟಿಪ್ಸ್ ಎಷ್ಟು ಬರುತ್ತೋ....)
***********************************
ರಿಷಪ್ಷನ್'ನಲ್ಲಿರೋ ಸವಿತಾ ನೋಡೋಕೆ ತುಂಬಾ ಚಂದ ಇದ್ದಾಳೆ(ಅದಕ್ಕೆ ಅವ್ಳನ್ನ ಕೆಲಸಕ್ಕೆ ಇಟ್ಕೊಂಡಿರೋದು ಅಂತಾ ಮೊನ್ನೆ ಭಟ್ರು ಹೇಳ್ತಿದ್ರು) ಅವಳೂ ನನ್ನ ನೋಡಿದ್ರೆ ನಗ್ತಾಳೆ .ಆದ್ರೂ ಅವ್ಳೆದ್ರಿಗೆ ಹೋದಾಗ ಒಂಥರಾ ಭಯ ಆಗುತ್ತೆ.ಮೊನ್ನೆ ಅವಳ ಬರ್ತ್'ಡೇಗೆ ಕೊಟ್ಟ ಚಾಕ್ಲೇಟ್ ಈಸ್ಕೊಳ್ಳೋವಾಗ ಕೈ ನಡುಗ್ತಾ ಇತ್ತು. ಅವಳೇ ಧೈರ್ಯಸ್ತೆ ಶೇಕ್'ಹ್ಯಾಂಡ್ ಕೊಡ್ತಾಳೆ(ಅಬ್ಬಾ ಎಷ್ಟು ಮೆದು ಅವಳ ಕೈ) ಅವಳಂತೆ ಧೈರ್ಯವಾಗಿ ವ್ಯವಹರಿಸೋಕೆ ನಾನದ್ಯವಾಗ ಕಲಿತೀನೋ... ಅವಳು ಹೇಳ್ತಾಳೆ ನಾಚಿಕೆ,ಸಂಕೋಚ ಇವನ್ನೆಲ್ಲಾ ಇಟ್ಕೊಂಡ್ರೆ ಬೆಂಗ್ಳೂರಲ್ಲಿ ಬದ್ಕೋಕಾಗಲ್ಲ ಹುರಿದು ಮುಕ್ಕಿಬಿಡ್ತಾರೆ,ನಿಮ್ ಥರಾ ಟ್ಯಾಲೆಂಟ್ ಇದ್ದಿದ್ರೆ ಇಷ್ಟೊತ್ತಿ ರೆಸ್ಟೋರೆಂಟ್ ಮ್ಯಾನೇಜರ್ ಆಗಿರ್ತಿದ್ದೆ
(ಥೂ ಇನ್ನಾದ್ರೂ ಬದಲಾಗ್ಬೇಕು ನಾನು)
-ಕೆಂಚನೂರಿನವ
ಮಂಗಳವಾರ, ಮೇ 28, 2013
ಸೋಮವಾರ, ಮೇ 27, 2013
ಶನಿವಾರ, ಮೇ 25, 2013
ಶುಕ್ರವಾರ, ಮೇ 24, 2013
ರಿಯಾಯಿತಿ ದರದ ಅಕ್ಕಿ ನ್ಯಾಯಬೆಲೆ ಅಂಗಡಿಗಳಲ್ಲಿ ಮೊದಲೂ ಕೊಡುತ್ತಿದ್ದರು ,ಈಗಲೂ ಕೊಡುತ್ತಿದ್ದಾರೆ .ಪ್ರಮಾಣ ಮತ್ತು ಬೆಲೆಯಲ್ಲಿ ವ್ಯತ್ಯಾಸವಾಗಿರಬಹುದಷ್ಟೆ(ಗುಣಮಟ್ಟವೊಂದೇ ಬದಲಾಗದೆ ಇರುವಂತದ್ದು) ಆದರೆ ಈಗ ಅದರ ಸುತ್ತ ಇಷ್ಟೊಂದು ಗುಲ್ಲೆದ್ದಿರುವುದು ಯಾಕೆಂದು ಅರ್ಥವಾಗುತ್ತಿಲ್ಲ
ಕೇವಲ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯನವರನ್ನ ಟೀಕಿಸಬೇಕೆಂಬ ಒಂದೇ ಉದ್ದೇಶದಿಂದ ಮಾಡುತ್ತಿರಬಹುದೆ? ಅನುಮಾನಗಳಿವೆ ನನಗೆ ಯಾಕೆಂದರೆ ಕಾಂಗ್ರೆಸ್ಸಿನ ಜನರಿಗೆ ಅದರಲ್ಲಿ ಹೊಸತೇನೂ ಕಾಣುವುದಿಲ್ಲ
ಇನ್ನು ಸಿದ್ಧರಾಮಯ್ಯನವರ ಬಗ್ಗೆ ಕೆಟ್ಟದ್ದಾಗಿ ಹೇಳಲು ಸಧ್ಯಕ್ಕೆ ಇವರ ಬಳಿ ಬಂಡವಾಳ ಇಲ್ಲ ಅದಕ್ಕೇ ಇವರು ಅಕ್ಕಿಯಲ್ಲಿ ಕಲ್ಲು ಹುಡುಕುತ್ತಿದ್ದಾರೇನೋ??.
ನನ್ನದೊಂದಿಷ್ಟು ಪ್ರಶ್ನೆಗಳಿವೆ...
ಡೀಸೆಲ್ ಕಾರುಗಳಿಗೆ ಸಬ್ಸಿಡಿ ಡೀಸೆಲ್ ಹಾಕಿಸುತ್ತೀರಲ್ಲ ಆಗ ನಿಮ್ಮ ದೇಶಭಕ್ತಿ ಎಲ್ಲಿ ಹೋಗಿರುತ್ತೆ?
ನೀವು ಎಂದಾದರೂ ಖಾಸಗಿ ಬಂಕ್'ಗಳಲ್ಲಿ ಡೀಸೆಲ್ ಹಾಕಿಸಿಕೊಳ್ತೀರಾ?
ನೀವು ಕೊಳ್ಳುವ ಸಿಲಿಂಡರ್ ಒಂದಕ್ಕೆ 500ಕ್ಕೂ ಮಿಕ್ಕಿ ಸಬ್ಸಿಡಿ ಕೊಡುತ್ತಾರೆ ಅದು ನಿಮಗೆ ಗೊತ್ತಿರಬೇಕಲ್ವ?(ಬಹುಶಃ 30 kg ಅಕ್ಕಿಗೆ ಅಷ್ಟಾಗಲಿಕ್ಕಿಲ್ಲ)bpl ಕಾರ್ಡಿನವರು ಗ್ಯಾಸ್ ಹೊಂದಿರುವುದಿಲ್ಲ
ತಿನ್ನಲು ಅನ್ನ ಕೊಟ್ಟರೆ ಬಾಯಿ ಬಡ್ಕೋತೀರಿ ಇದು ನಿಮ್ಮ ಸಣ್ಣತನವಲ್ಲವೆ?
ಕೇವಲ ಅಕ್ಕಿಕೊಟ್ಟ ಮಾತ್ರಕ್ಕೆ ಬಡವರು ಆಲಸಿಗಳಾಗುತ್ತಾರೆಯೆ? ಆಗಲಿ ಬಿಡಿ ಯಾರು ತಾನೇ ಆಲಸಿಗಳಲ್ಲ ಹೇಳಿ?
ನಿಮ್ಮಗಳ ಅಲಕ್ಷದಿಂದಲೇ ಅಲ್ಲವೇ ಮತದಾನದ ಸರಾಸರಿ ಶೇಖಡಃ ಐವತ್ತೂ ದಾಟದಿರುವುದು?
ಬಡವರು ಆಲಸಿಗಳಾಗಿದ್ದರೆ ನೀವು ನಿಮ್ಮದೆಂದು ಬೀಗುವ ತೋಟ ಗದ್ದೆಗಳು ಬರಡು ಬಿದ್ದು ಯಾವುದೋ ಕಾಲವಾಗಿರುತಿತ್ತು
ರಸ್ತೆಬದಿಯ ಜೋಪಡಿಗಳಲ್ಲೂ ಅವರು ಬದುಕುತ್ತಿರುವುದು ಅಮಿತ ಜೀವನುತ್ಸಾಹದಿಂದಲೇ ಹೊರತು ಅಲಸ್ಯದಿಂದಲ್ಲ
ಅಂದಿನ ಜನತಾ ಸರ್ಕಾರ ಅಕ್ಕಿಯ ಜೊತೆ ಸೀರೆ ಪಂಚೆ ಇತ್ಯಾದಿಗಳನ್ನೂ ಕಡಿಮೆ ದರದಲ್ಲಿ ನೀಡಿತ್ತು ಆಗ ಬಂದಿರದ ಅನುಮಾನಗಳು ಯಾಕೆ?
ಸಾಧ್ಯವಾದರೆ ಬದಲಾಗಿ ಎಲ್ಲದರಲ್ಲೂ ರಾಜಕೀಯ ಮಾಡಬೇಡಿ
ಭಾವನೆಗಳ ಜೊತೆ ರಾಜಕೀಯವಾಯ್ತು
ಈಗ ಅಕ್ಕಿಯೆ?
-ಕೆಂಚನೂರಿನವ
ಗುರುವಾರ, ಮೇ 23, 2013
ಬುಧವಾರ, ಮೇ 22, 2013
ಮಂಗಳವಾರ, ಮೇ 21, 2013
1)
ನೆನಪು
ನಾನು ಮಾತ್ರವಲ್ಲ
ನನ್ನ ಕವಿತೆಗಳೂ
ಹೊರಬಂದಿಲ್ಲ
ನಿನ್ನ
ನೆನಪಿನ ಹಂಗಿನಿಂದ
2)
ನೀನು
ಕವಿ ಕಾಣಲಾಗದ
ಕನಸು
ರವಿ ಅರಳಿಸಲಾಗದ
ಹೂವು
3)
ನಾನು
ಅಲೆಮಾರಿ
ನಾನು
ನಿನ್ನೊಲುಮೆಯೆಡೆಗೆ
ಸದಾ ನನ್ನ ನಡಿಗೆ
4)
ಪ್ರಾರ್ಥನೆ
ಎದೆಯ ಬಯಲಲ್ಲಿ
ಅಲೆಮಾರಿಯ ಡೇರೆಯಿದೆ
ಬಿರುಗಾಳಿಯೆ ಕರುಣೆಯಿರಲಿ
ಅವನಿಲ್ಲಿರುವ ತನಕ
5)
ಪ್ರೀತಿ
ಹಚ್ಚಿಟ್ಟಿದ್ದೇನೆ
ಪ್ರಣತಿಯೊಂದನ್ನ
ನನ್ನ ಮನೆಮುಂದೆ
ಓ ಫಕೀರನೇ,
ಇಲ್ಲಿ
ಉಳಿಯಲಾಗದಿದ್ದರೆ
ಇನಿತು ವಿಶ್ರಮಿಸು
ನನ್ನೆದೆಯ
ಜಗುಲಿ ಮೇಲೆ
-ಕೆಂಚನೂರಿನವ