ಶುಕ್ರವಾರ, ಮೇ 24, 2013

ರಿಯಾಯಿತಿ ದರದ ಅಕ್ಕಿ ನ್ಯಾಯಬೆಲೆ ಅಂಗಡಿಗಳಲ್ಲಿ ಮೊದಲೂ ಕೊಡುತ್ತಿದ್ದರು ,ಈಗಲೂ ಕೊಡುತ್ತಿದ್ದಾರೆ .ಪ್ರಮಾಣ ಮತ್ತು ಬೆಲೆಯಲ್ಲಿ ವ್ಯತ್ಯಾಸವಾಗಿರಬಹುದಷ್ಟೆ(ಗುಣಮಟ್ಟವೊಂದೇ ಬದಲಾಗದೆ ಇರುವಂತದ್ದು) ಆದರೆ ಈಗ ಅದರ ಸುತ್ತ ಇಷ್ಟೊಂದು ಗುಲ್ಲೆದ್ದಿರುವುದು ಯಾಕೆಂದು ಅರ್ಥವಾಗುತ್ತಿಲ್ಲ
ಕೇವಲ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯನವರನ್ನ ಟೀಕಿಸಬೇಕೆಂಬ ಒಂದೇ ಉದ್ದೇಶದಿಂದ ಮಾಡುತ್ತಿರಬಹುದೆ? ಅನುಮಾನಗಳಿವೆ ನನಗೆ ಯಾಕೆಂದರೆ ಕಾಂಗ್ರೆಸ್ಸಿನ ಜನರಿಗೆ ಅದರಲ್ಲಿ ಹೊಸತೇನೂ ಕಾಣುವುದಿಲ್ಲ
ಇನ್ನು ಸಿದ್ಧರಾಮಯ್ಯನವರ ಬಗ್ಗೆ ಕೆಟ್ಟದ್ದಾಗಿ ಹೇಳಲು ಸಧ್ಯಕ್ಕೆ ಇವರ ಬಳಿ ಬಂಡವಾಳ ಇಲ್ಲ ಅದಕ್ಕೇ ಇವರು ಅಕ್ಕಿಯಲ್ಲಿ ಕಲ್ಲು ಹುಡುಕುತ್ತಿದ್ದಾರೇನೋ??.

ನನ್ನದೊಂದಿಷ್ಟು ಪ್ರಶ್ನೆಗಳಿವೆ...
ಡೀಸೆಲ್ ಕಾರುಗಳಿಗೆ ಸಬ್ಸಿಡಿ ಡೀಸೆಲ್ ಹಾಕಿಸುತ್ತೀರಲ್ಲ ಆಗ ನಿಮ್ಮ ದೇಶಭಕ್ತಿ ಎಲ್ಲಿ ಹೋಗಿರುತ್ತೆ?
ನೀವು ಎಂದಾದರೂ ಖಾಸಗಿ  ಬಂಕ್'ಗಳಲ್ಲಿ ಡೀಸೆಲ್ ಹಾಕಿಸಿಕೊಳ್ತೀರಾ?
ನೀವು ಕೊಳ್ಳುವ ಸಿಲಿಂಡರ್ ಒಂದಕ್ಕೆ 500ಕ್ಕೂ ಮಿಕ್ಕಿ ಸಬ್ಸಿಡಿ ಕೊಡುತ್ತಾರೆ ಅದು ನಿಮಗೆ ಗೊತ್ತಿರಬೇಕಲ್ವ?(ಬಹುಶಃ 30 kg ಅಕ್ಕಿಗೆ ಅಷ್ಟಾಗಲಿಕ್ಕಿಲ್ಲ)bpl ಕಾರ್ಡಿನವರು ಗ್ಯಾಸ್ ಹೊಂದಿರುವುದಿಲ್ಲ

ತಿನ್ನಲು ಅನ್ನ ಕೊಟ್ಟರೆ ಬಾಯಿ ಬಡ್ಕೋತೀರಿ ಇದು ನಿಮ್ಮ ಸಣ್ಣತನವಲ್ಲವೆ?

ಕೇವಲ ಅಕ್ಕಿಕೊಟ್ಟ ಮಾತ್ರಕ್ಕೆ ಬಡವರು ಆಲಸಿಗಳಾಗುತ್ತಾರೆಯೆ? ಆಗಲಿ ಬಿಡಿ ಯಾರು ತಾನೇ ಆಲಸಿಗಳಲ್ಲ ಹೇಳಿ?
ನಿಮ್ಮಗಳ ಅಲಕ್ಷದಿಂದಲೇ ಅಲ್ಲವೇ ಮತದಾನದ ಸರಾಸರಿ ಶೇಖಡಃ ಐವತ್ತೂ ದಾಟದಿರುವುದು?
ಬಡವರು ಆಲಸಿಗಳಾಗಿದ್ದರೆ ನೀವು ನಿಮ್ಮದೆಂದು ಬೀಗುವ ತೋಟ ಗದ್ದೆಗಳು ಬರಡು ಬಿದ್ದು ಯಾವುದೋ ಕಾಲವಾಗಿರುತಿತ್ತು
ರಸ್ತೆಬದಿಯ ಜೋಪಡಿಗಳಲ್ಲೂ ಅವರು ಬದುಕುತ್ತಿರುವುದು ಅಮಿತ ಜೀವನುತ್ಸಾಹದಿಂದಲೇ ಹೊರತು ಅಲಸ್ಯದಿಂದಲ್ಲ
ಅಂದಿನ ಜನತಾ ಸರ್ಕಾರ ಅಕ್ಕಿಯ ಜೊತೆ ಸೀರೆ ಪಂಚೆ ಇತ್ಯಾದಿಗಳನ್ನೂ ಕಡಿಮೆ ದರದಲ್ಲಿ ನೀಡಿತ್ತು ಆಗ ಬಂದಿರದ ಅನುಮಾನಗಳು ಯಾಕೆ?

ಸಾಧ್ಯವಾದರೆ ಬದಲಾಗಿ ಎಲ್ಲದರಲ್ಲೂ ರಾಜಕೀಯ ಮಾಡಬೇಡಿ
ಭಾವನೆಗಳ ಜೊತೆ ರಾಜಕೀಯವಾಯ್ತು
ಈಗ ಅಕ್ಕಿಯೆ?
-ಕೆಂಚನೂರಿನವ

1 ಕಾಮೆಂಟ್‌:

  1. ಸಾರ್, ಮೇಲ್ವರ್ಗದವರನ್ನು ಓಲೈಸಿದರೆ ರಾಜಕಾರಣಿಗಳಿಗೆ ಲಂಚ ಸಿಗುತ್ತದೆ, ಕೆಳ ವರ್ಗದವನ್ನು ಓಲೈಸಿದರೆ ಓಟು ಬ್ಯಾಂಕು ಭದ್ರವಾಗುತ್ತದೆ. ನಡುವೆ ನಲುಗುವವರು ನಾವೇ ಮದ್ಯವರ್ಗದ ಜನ! :(

    ಪ್ರತ್ಯುತ್ತರಅಳಿಸಿ