ಒಂದು ಬೇಸಿಗೆಯ ಅಪರಾಹ್ನ
ಹಾಳೆಯೊಂದು
ಬಯಲ ಖಾಲಿತನ
ತುಂಬುತ್ತಿದೆ
ಬಯಲ ಉದ್ದಕ್ಕೂ ಹಾರುತ್ತಾ
-ಕೆಂಚನೂರಿನವ
...ತಿರಸ್ಕಾರ ಮತ್ತು ಅವಮಾನ ಒಬ್ಬ
ಗಂಡಸು ಭರಿಸಲು ಸಾಧ್ಯವಿಲ್ಲದ
ಎರಡು ವಿಷಯಗಳು ಬಹುಶಃ ನೀನು ಅಂದು ಒಂದೆರಡು ಮಾತುಗಳನ್ನು ಕೂಡಾ ಆಡದೇ ಹಿಂದಕ್ಕೆ
ಕಳುಹಿಸದೆ ಇದ್ದಿದ್ದರೆ
ನಾನು ಇಂದಿಗೂ ನಿನ್ನನ್ನು ಇಷ್ಟು ತೀವ್ರವಾಗಿ
ತಪಿಸುತ್ತಿರಲಿಲ್ಲ ಆದರೆ ನೀನು ಒಬ್ಬ
ಅಪರಿಚಿತನೆಡೆಗೆ
ನಾವು ತೋರಬಹುದಾದ ಕನಿಷ್ಠ
ಸೌಜನ್ಯವನ್ನು ಕೂಡ
ತೋರದೇ ಹೋದೆ ನಿನ್ನ
ಸಾನಿಧ್ಯದಲ್ಲಿ ಅಂದು ನಾನು ಕಳೆದ
ಕೊನೆಯ
ಕೆಲವು ಘಳಿಗೆಗಳನ್ನು ನೆನೆಯುವಾಗ
ನನ್ನ
ಕುರಿತು ನನಗೇ ಒಂದು ರೀತಿಯ
ಅಸಹನೆ ಉಂಟಾಗುತ್ತದೆನಿಜಕ
್ಕೂ ಮನುಷ್ಯ
ಅಷ್ಟು ಧೈನ್ಯನಾಗಲು ಸಾಧ್ಯವೇ ಅನ್ನಿಸುತ್ತದೆ
ಬಹುಶಃ ನಿನ್ನನ್ನು ಕಳೆದುಕೊಂಡ
ಬಗೆಗಿನ ನೋವಿಗಿಂತ ನಿನ್ನಿಂದ
ತಿರಸ್ಕೃತನಾದ
ನೋವೇ ನನ್ನನ್ನು ಹೆಚ್ಚು ತಿನ್ನುತ್ತಿದ್ದಿರ
ಬೇಕು ಯಾಕೆಂದರೆ ಒಬ್ಬ ಮನುಷ್ಯ
ಅವನು ಅವನನ್ನು ಪ್ರೀತಿಸಿಕೊಂಡಷ್ಟ
ು ಇನ್ನೊಬ್ಬರನ್ನು ಪ್ರೀತಿಸಲಾರ
ಇದು ಮನುಷ್ಯನ ಮಿತಿ
ನೀನು ನನ್ನನ್ನು ಪ್ರೀತಿಸುತ್ತೀಯ
ಎನ್ನುವುದನ್ನು ತಿಳಿದಾಗ
ಅದು ನನ್ನ ಕುರಿತ ನನ್ನ
ಅಹಂಕಾರವನ್ನು ತಣಿಸುತ್ತದೆ
ಅದೇ ನೀನು ತಿರಸ್ಕರಿಸಿದಾಗ ಆ
ಅಹಂ ಗೆ
ಪೆಟ್ಟು ಬಿದ್ದು ಮೊದಲು ಸಿಟ್ಟು ಬರುತ್ತದೆ
ಆ
ಸಿಟ್ಟನ್ನು ಕಾಲವಷ್ಟೇ ತಣಿಸುತ್ತದೆ
ಹಾಗೆ ಸಿಟ್ಟು ತಣಿದು ಹತಾಶೆ
ಉಂಟಾಗುತ್ತದೆ ಆ ಹತಾಶೆ
ಸ್ವಾನುಕಂಪಕ್ಕೆ ತಳ್ಳುತ್ತದೆ ಆ
ಸ್ವಾನುಕಂಪ
ಕೆಲವರನ್ನು ಕವಿಯಾಗಿಸಿದರೆ
ಇನ್ನೂ ಕೆಲವರನ್ನು ಕುಡುಕರನ್ನಾಗಿಸುತ
್ತದೆ ಅಂತಹ ಸ್ವಾನುಕಂಪದಿಂದ
ಹೊರಬಂದವನು ಬದುಕು ಕಟ್ಟಿಕೊಳ್ಳುತ್ತನ
ಾದರೂ ಅವನೊಳಗೆ
ಅದೊಂದು ನೋವು ಗುಪ್ತಗಾಮಿನಿಯಂತೆ
ಹರಿಯುತ್ತಲೇ ಇರುತ್ತದೆ ಬದುಕಿನ
ವಿವಿಧ ಘಟ್ಟಗಳಲ್ಲಿ ಆ ನೋವಿನ ಕುರಿತ
ಭಾವಗಳು ಬದಲಾಗುತ್ತದೆ ಆದರೆ
ಮರೆಯಾಗುವುದಿಲ್ಲ.....
( ಮುಂದುವರೆಯಲೂಬಹುದು )
ಕಳೆದುಕೊಳ್ಳುವ ಭಯ
ನಿಜ ಹೇಳದಂತೆ ತಡೆಯಿತು;
ಏಕಾಂತದಲ್ಲಿ ಪಶ್ಚತ್ತಾಪದ ಬೆಂಕಿ
ಇಷ್ಟಿಷ್ಟೇ ಸುಡಲಾರಂಭಿಸಿತು
-ಕೆಂಚನೂರಿನವ
ಯುದ್ಧಗಳಿಲ್ಲದ ದೇಶವನ್ನು
ಕಲ್ಪಿಸಿಕೊಳ್ಳಲಾಗದ ಹಿಂಸ್ರಪಶುಗಳು
ಶಾಂತಿಯ ಪಾಠ ಹೇಳುತ್ತಿದ್ದ
ಫಕೀರನನ್ನು ಗಡಿಪಾರು ಮಾಡಿದರು
*
ತಿನ್ನಲು ಅನ್ನವಿಲ್ಲದ ಊರಿನುದ್ದಕ್ಕೂ
ಈಗ ಹತಾರಗಳ ಅಂಗಡಿ
ನೇಗಿಲು ನೋಡಿ ಗೊತ್ತಿಲ್ಲದ ಮಗು
ಆಟಿಕೆಯ ಕೋವಿಗೆ ಹಟ ಮಾಡುತ್ತಿದೆ
*
ರಾಯರದು ಸಂತೃಪ್ತ ಜೀವನ
ಮಗನಿಗೆ ಹೊರದೇಶದಲ್ಲಿ ಕೆಲಸ
ಕೆಲಸವಿಲ್ಲದ ಇವರು
ಹೊತ್ತು ಕಳೆಯಲು
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ
ದೇಶಭಕ್ತಿಯ ಪಾಠ ಮಾಡುತ್ತಾರೆ
-ಕೆಂಚನೂರಿನವ
ಅಹಿಂಸೆಯ ಪಾಠ ಓದಿದ ಹುಲಿ
ಹುಲ್ಲು ತಿನ್ನಲಾಗದೆ
ಉಪವಾಸದಿಂದ ಸತ್ತಿತು;
ನೆತ್ತರು ಹರಿದರಷ್ಟೇ ಕೊಲೆಯೆಂದು
ಕಾನೂನು ಪುಸ್ತಕದಲ್ಲಿ ಬರೆದಿತ್ತು
- ಶಂಕರ ಕೆಂಚನೂರು
ಗೋವಿನ ಹಾಡನ್ನು ಮತ್ತೆ ಮತ್ತೆ
ಓದಿಕೊಂಡೆ
ಭಾವನೆಗಳಿಗೆ ಬಲಿಯಾದರೆ
ಸಾವು ಖಾತರಿ
ಎಂಬುದನ್ನು ಕಂಡುಕೊಂಡೆ
- ಶಂಕರ ಕೆಂಚನೂರು
ನಮ್ಮದೇ ನೆಲದ ನಮ್ಮ
ದೇವರುಗಳು ಇಲ್ಲಿ ಎರಡನೇ ದರ್ಜೆಯ
ದೇವರುಗಳು
ನಮ್ಮದೇ ಹಿರಿಯರು ಆಡುತ್ತಿದ್ದ ಭಾಷೆ
ಇಲ್ಲಿ ಎರಡನೇ ದರ್ಜೆಯ ಭಾಷೆ
ನಮ್ಮದೇ ನೆಲದ ಆಚಾರ-ವಿಚಾರಗಳು
ಇಲ್ಲಿ ಆಡಿಕೊಳ್ಳಲು ಹಾಸ್ಯದ
ವಸ್ತುಗಳು
ನಮ್ಮದೇ ನೆಲದ ಹುಡುಗರು
ಯಾರದ್ದೋ ಸಂಸ್ಕೃತಿ ಉಳಿಸುವ
ಪರಿಕರಗಳು
ಇವರು ಗತವೈಭವದ ಮಾತಾಡುತ್ತಾರೆ
ತಮ್ಮದೇ ಹಿರಿಯರ ಎದೆಯ ಮೇಲೆ ಎಳೆದ
ಚಪ್ಪಡಿ ಕಲ್ಲುಗಳ ಮರೆತು
-ಕೆಂಚನೂರಿನವ
ಹೀಗೆ ಉದ್ದಕ್ಕೂ ಬಿದ್ದುಕೊಂಡಿರುವ
ಈ ಕಪ್ಪು ರಸ್ತೆ
ಅದೆಷ್ಟು ರಕ್ತ ಕುಡಿದಿದೆಯೆಂದು
ಇದರ ನುಣುಪನ್ನು ಹಾಡಿ ಹೊಗಳುವ
ಜನರಿಗೆ ತಿಳಿದಿಲ್ಲ
-ಕೆಂಚನೂರಿನವ
ಅಭಿವೃದ್ಧಿ
ಅಂಗಳದ ಪಾರಿಜಾತ
ನೇರ
ರಸ್ತೆಗೆ ಬೀಳುತ್ತದೆ
ಮತ್ತೆ
ವಾಹನಗಳ ಚಕ್ರಕ್ಕೆ
ಬಲಿಯಾಗುತ್ತದೆ
ಇವಳು ಹೆಕ್ಕುವ ಮೊದಲೇ
ಫೋಟೋದಲ್ಲಿ ನಗುವ ಹಿರಿಯರು
ಪ್ಲಾಸ್ಟಿಕ್ ಹೂವಿನಡಿಯಿದ್ದಾರೆ
ಮತ್ತೆ
ಅವರಸಮಾಧಿ ರಸ್ತೆಯಡಿಯಲ್ಲಿ
ಹೌದು
ಭಾರತ ಪ್ರಕಾಶಿಸುತ್ತಿದೆ
ದೊಡ್ಡ ದೊಡ್ಡ ರಸ್ತೆ ದೀಪಗಳಡಿ
ಮತ್ತೆ
ಅದನ್ನು ನಿರ್ಮಿಸಲು ಬಂದ
ಕೂಲಿಗಳ ತಾತ್ಕಾಲಿಕ ಶೆಡ್ಡುಗಳಲ್ಲಿ
-ಕೆಂಚನೂರಿನವ