ಬುಧವಾರ, ಏಪ್ರಿಲ್ 2, 2014

ಕವಿತೆ

ಅಭಿವೃದ್ಧಿ
ಅಂಗಳದ ಪಾರಿಜಾತ
ನೇರ
ರಸ್ತೆಗೆ ಬೀಳುತ್ತದೆ
ಮತ್ತೆ
ವಾಹನಗಳ ಚಕ್ರಕ್ಕೆ
ಬಲಿಯಾಗುತ್ತದೆ
ಇವಳು ಹೆಕ್ಕುವ ಮೊದಲೇ

ಫೋಟೋದಲ್ಲಿ ನಗುವ ಹಿರಿಯರು
ಪ್ಲಾಸ್ಟಿಕ್ ಹೂವಿನಡಿಯಿದ್ದಾರೆ
ಮತ್ತೆ
ಅವರಸಮಾಧಿ ರಸ್ತೆಯಡಿಯಲ್ಲಿ

ಹೌದು
ಭಾರತ ಪ್ರಕಾಶಿಸುತ್ತಿದೆ
ದೊಡ್ಡ ದೊಡ್ಡ ರಸ್ತೆ ದೀಪಗಳಡಿ
ಮತ್ತೆ
ಅದನ್ನು ನಿರ್ಮಿಸಲು ಬಂದ
ಕೂಲಿಗಳ ತಾತ್ಕಾಲಿಕ ಶೆಡ್ಡುಗಳಲ್ಲಿ

-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ