ಸೋಮವಾರ, ಮಾರ್ಚ್ 25, 2013

ಕೇದಗೆಯ ಬನದಲ್ಲ
ಮೈ ಮರೆತು ಮಲಗಿತ್ತು
ಘಮದ ಅಮಲಿನಲಿ
ಕೇಕೆ ಹಾಕಿತು
ರಣಹದ್ದು ಒಮ್ಮೆ
ಅಮಲಿನಲಿ ಕೇಳಲಿಲ್ಲ
ಹಾವಿಗೆ
ಇನ್ನಷ್ಟು ಹತ್ತಿರದಲಿ
ಸಾವಿನ ಕೇಕೆ
ಭ್ರಮೆ ಬಿಟ್ಟು ಎದ್ದರೆ
ಬಿಡುತ್ತಿಲ್ಲ
ಕೇದಗೆಯ ನಂಟು
ಓಡಲು
ಎರಗಿದ ರಣಹದ್ದು
ಬಾಚಿಕೊಂಡಿತು ಕಾಲಲ್ಲಿ
ಮೇಲೆರುತ್ತದ್ದಂತೆಲ್ಲಾ
ಅಮಲು ಮರೆಯಾಗಿ
ನಿಜದ ದರ್ಶನ
ತಡವಾಗಿ ಬಿಟ್ಟಿದೆ
ಇನ್ನಿಲ್ಲ ಪ್ರಯೋಜನ
ಸಾವು ಕರೆದೊಯ್ಯುವಾಗ
ಹಿಂಬಾಲಿಸ ಬೇಕಷ್ಟೆ
ಇದು ಬದುಕು

ಅಮಲಿಳಿಯದೆ ದರ್ಶನವಿಲ್ಲ
ದರ್ಶನವಿಲ್ಲದೆ ಅಮಲಿಳಿಯುವುದಿಲ್ಲ

1 ಕಾಮೆಂಟ್‌: