ಗುರುವಾರ, ಆಗಸ್ಟ್ 29, 2013

ಮಕ್ಕಳ ವಿಷಯದಲ್ಲಿ
ಎಲ್ಲಾ ಅಪ್ಪಂದಿರೂ
ದೃತರಾಷ್ಟರೇ
*
ಹೊರಗಿನ ಸದ್ದಿಗೆ
ಎಚ್ಚರಗೊಳ್ಳದವನು ಧ್ಯಾನಿ
ಒಳಗಿನ ಸದ್ದಿಗೆ
ಎಚ್ಚರಗೊಳ್ಳುವವನು ಜ್ಞಾನಿ
*
ಮಿಣುಕು ಹುಳುವಿಗೆ
ಅಮಾವಾಸ್ಯೆಯಲ್ಲೇ
ಹೆಚ್ಚು ಹೊಳಪು
ಸುಮ್ಮನೇ ಹುಣ್ಣಿಮೆ
ಹೊಗಳದಿರಿ

-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ