ಭಾನುವಾರ, ಆಗಸ್ಟ್ 11, 2013

ಇಲ್ಲಿನ ಪಾಪ ನಿವೇದನೆಯ ರೊಟ್ಟಿಗಳು
ಪ್ರಾಯಶ್ಚಿತದ ಬೆಂಕಿಯಲ್ಲಿ ಸುಟ್ಟಿಲ್ಲ
ಹದವಾದೀತಾದರೂ ಹೇಗೆ ?

ಇಲ್ಲಿನ ಇಮಾರತುಗಳಿಗೆ
ಮೆಹನತ್ತಿನ ಲೇಪವೇ ಇಲ್ಲ
ದೌಲತ್ತುಗಳಿಗೆ
ಹೊಳಪು ಬಂದೀತಾದರೂ ಹೇಗೆ ?

ಇಲ್ಲಿನ ಸಂಬಂಧಗಳಿಗೆ
ಸಹನೆಯ ಲವಲೇಶವೂ ಗೊತ್ತಿಲ್ಲ
ಬಾಳಿಕೆ ಬಂದೀತಾದರೂ ಹೇಗೆ ?

-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ