ಯಾರೂ ಇಲ್ಲದ ಮನೆಯ
ಅರೆತೆರೆದ ಕಿಟಕಿಗಳು
ಸುಮ್ಮನೇ
ರಸ್ತೆ ದಿಟ್ಟಿಸುತ್ತವೆ
ಮೊನ್ನೆ ಮಂದಿರ
ಬೀಳದೇ ಹೋಗಿದ್ದು
ಅವನಿಗೆ ಬೇಸರ ತರಿಸಿತಂತೆ.
ಬಯಲಾಗುವ ಆಸೆಯವನಿಗೆ
ಜಗದ ಭ್ರಮೆ
ಕಳೆವ ಪಣ ತೊಟ್ಟು
ಹೊರಟ.
ಈಗವನಿಗೆ
ಭ್ರಮೆ ಕಳಚಿದೆಯಂತೆ
ತುಳುಕದಿರುವುದೆಲ್ಲವೂ
ತುಂಬಿರುವುದಿಲ್ಲ, ಒಮ್ಮೊಮ್ಮೆ
ಮಾಡಿನಿಂದ
ತೊಟ್ಟಿಕ್ಕುವ ಹನಿ
ಇರುಳ ನೀರವದಲ್ಲಿ
ಬಹಳ ದೊಡ್ಡಸದ್ದು
ಹಸಿದ ಹುಡುಗನಿಗೆ
ಅನ್ನದ ಪದ್ಯ ಹೇಳಿದೆ,
ಹಸಿವಿಂಗಲಿಲ್ಲವಂತೆ
-ಕೆಂಚನೂರಿನವ
ಹಲವು ಭಾವಗಳ ಸಂಗಮ.
ಪ್ರತ್ಯುತ್ತರಅಳಿಸಿ