ಹೊತ್ತು ಹೊತ್ತಿಗೆ
ಬುದ್ಧ, ರೂಮಿ, ಕಬೀರ
ಎಲ್ಲರೂ ಸಿಗುತ್ತಾರೆ
ಪಂಡಿತರ ಅಂಗಡಿಯಲ್ಲಿ
ಕಾಲಕ್ಕೆ ತಕ್ಕಂತೆ
ಕವಿತೆ, ಕತೆ, ಇನ್ನೇನೋ
ಎಲ್ಲವೂ ಸಿಗುತ್ತವೆ
ಪಂಡಿತರ ಅಂಗಡಿಯಲ್ಲಿ
ಅಗತ್ಯಕ್ಕೆ ತಕ್ಕಂತೆ
ಮಾನವತೆ, ಪ್ರೀತಿ, ಕಾಳಜಿ
ಎಲ್ಲವೂ ದೊರೆಯುತ್ತದೆ
ಪಂಡಿತರ ಅಂಗಡಿಯಲ್ಲಿ
ಆದರೂ ಗೊಣಗುತ್ತಾರೆ ಜನ
ಇಲ್ಲೇನೋ ಸರಿಯಿಲ್ಲವೆಂದು
ಎದೆಯ ದನಿ ಕೇಳುತ್ತಿಲ್ಲವೆಂದು
ಬರಿಯ ಬಾಯಿಪಾಠ
ಕಲ್ಲಿನ ಮೇಲಿನ ಮಳೆಯಂತೆ ಎಂದು
ಈ ಪಂಡಿತರಿಗೆ ತಿಳಿಹೇಳಿ ಯಾರಾದರೂ
-ಕೆಂಚನೂರಿನವ
ಅದು ಮೆಚ್ಚಿಸಲು ಕಾವ್ಯ ಬರೆಯುವವರ ಪರಂಪರೆ.
ಪ್ರತ್ಯುತ್ತರಅಳಿಸಿಕವನ ತುಂಬಾ ಸುಂದರವಾಗಿದೆ...
ಪ್ರತ್ಯುತ್ತರಅಳಿಸಿ