ಭಾನುವಾರ, ಫೆಬ್ರವರಿ 3, 2013


ಕೇಸರಿ ಅವರಿಗಿಷ್ಟ
ಇವರಿಗೆ ಹಸಿರು
ಇವರ ಜಗಳಕ್ಕೆ
ನಡುವಿನ ಬಿಳಿ
ಪೂರ್ತಿ ರಾಡಿ
ಸಾರ್ವಭೌಮತೆಯ ಚಕ್ರ
ಸಡಿಲ ಬಾಯಿಯ ನಾಯಕರು-
ಗಳ ಆಟದ ಚಕ್ರ
ಅಂದಂತೆ
ನಮ್ಮದು ಗಣ(ಅ)ತಂತ್ರ
ನಾಳೆ ಅದರ ನೆನಪಿನ ದಿನ
ನಾನು ಹೋಗಲಿದ್ದೇನೆ
ಹೂವಿಡಲು
ಸಭ್ಯ ನಾಗರಿಕ ನಾನು
ಕೊಲ್ಲುವಾಗ ತಡೆಯುವುದಿಲ್ಲ
ಸತ್ತಮೇಲೆ
ಹೂ ಹಾಕಲು ಮರೆಯುವುದಿಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ