ಸೋಮವಾರ, ಜನವರಿ 20, 2014

ಅವಳು ವಾಸಿಸುವ ಷಹರದ ಗಲ್ಲಿಗಳಲ್ಲಿ
ಒಬ್ಬ ನತದೃಷ್ಟನ ಕುರಿತ
ಮಾತು ಬಂದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ಒಂದೂಚಿಲ್ಲರೆ ನೋಟಕ್ಕೆ
ಹೃದಯ ಮಾರಿಕೊಂಡವನ ಕುರಿತು
ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ನಗುವ ಲೇಪಿಸಿದ ಕತ್ತಿಗೆ
ನಗುತ್ತಲೇ ಕುತ್ತಿಗೆಯೊಡ್ಡಿದವನ
ಕುರಿತು ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ಸಾವಿನಲ್ಲೂ ತೆರೆದ ಕಣ್ಣುಗಳಲ್ಲಿ
ಅವಳಿಗಾಗಿ ಕಾಯುತ್ತಿದ್ದವನ ಕುರಿತು
ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ಮಧುಶಾಲೆಯ ಪಡಸಾಲೆಗಳಲ್ಲಿ
ಕುಡಿಯದೇ ಅಮಲಲ್ಲಿ ತೇಲುವವನ
ಕುರಿತು ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ