ಮಂಗಳವಾರ, ಏಪ್ರಿಲ್ 2, 2013

ಹನಿಗೊಂಚಲು-೨

೧)
ಈಗೀಗ ಬೀಳುವ
ಪೋಲಿ ಕನಸುಗಳಿಗೆ
ನಾನೇ ಕಾರಣ
ಎಂಬುದು
ಅವಳ ಇತ್ತೀಚಿನ ಆರೋಪ

೨)
ಈಗ ಅರಳಿ
ಈಗ ಬಾಡುವ ಹೂವು
ವ್ಯತ್ಯಾಸವೇನಿಲ್ಲ
ಹೀಗೆ ಬಂದು
ಹಾಗೆ ಹೋಗಬೇಕು ನಾವು

೩)
ಪತಂಗವನ್ನ ಕೇಳಿದೆ
ಬೆಂಕಿಯನ್ನು ಪ್ರೀತಿಸಿ
ನಿನ್ನ ಸುಟ್ಟುಕೊಂಡು
ಏನು ಪ್ರಯೋಜನ?
ಪತಂಗ ಹೇಳಿತು
ಪ್ರಯೋಜನ ಬಯಸೋದು
ಪ್ರೇಮವಲ್ಲ,ವ್ಯವಹಾರ

೪)
ಒಮ್ಮೊಮ್ಮೆ ಪತಂಗ
ದೀಪವನ್ನೇ ಆರಿಸುವುದುಂಟು

೫)
ಅವಳು
ನೋವು ಹೇಳಿಕೊಂಡು
ಹನಿಯಾಗಿಸು ಎಂದಳು
ನನ್ನ ಕಣ್ಣು ಹನಿಯಾಗಿತ್ತು

೬)
ಅವಳ ನೋವನ್ನ
ಕವಿತೆಯಾಗಿಸಿದೆ
ಎಲ್ಲರೂ ಮೆಚ್ಚಿದರು
ಅವಳ ಕ್ಷಮಿಸಲಿಲ್ಲ

೭)
ಬೇಲಿಯಲ್ಲಿ ಹೂವರಳಿದರೆ
ದಾರಿ ಹೋಕರಿಗೆ
ಮೈಯೆಲ್ಲ ಕಣ್ಣು

೮)
ಮನೆಯೊಳಗೆ ಹೂಗಂಧ
ಬೇಕೆಂದರೆ
ಅಂಗಳದಲ್ಲಿ ಹೂ
ಅರಳಿಸಬೇಕು

ಕೆಂಚನೂರು ಶಂಕರ

1 ಕಾಮೆಂಟ್‌: