ಶನಿವಾರ, ಡಿಸೆಂಬರ್ 28, 2013

ನನ್ನಂತ ಅಲೆಮಾರಿಯನ್ನೂ
ನೆಂಟನಂತೆ ಉಪಚರಿಸುವ
ನೀನು ನನ್ನ ಆತ್ಮಬಂಧು
ಅಲ್ಲವೇನೆ ಸಾಕಿ?
*
ಬೆಳಕು
ಸಂಜೆಗತ್ತಲಲ್ಲಿ
ಉಳ್ಳವರ ಮನೆ ಸೇರಿತ್ತು
ದೀಪದ ರೂಪದಲ್ಲಿ
ಕತ್ತಲು
ಅನಾಥರ ನಿಜದ ಬಂಧು
*
ಮಂದಿರದ ಒಳಗೆ
ಮತ್ತು
ಮಧುಶಾಲೆಯ ಒಳಗೆ
ಮಂದ ಕತ್ತಲು
ಕಾರಣವಿಷ್ಟೇ;
ಅಮಲು
ಬೆಳಕಿನಲ್ಲಿ ರುಚಿಸುವುದಿಲ್ಲ

-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ